top of page
BMCH Website Header 1.jpg

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 17ನೇ ಘಟಿಕೋತ್ಸವ ಸಮಾರಂಭ

  • Writer: Shakti Prasad
    Shakti Prasad
  • May 8, 2025
  • 2 min read

ಚಿತ್ರದುರ್ಗ ಮೇ 7 : ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಚ್ಚುಗತ್ತಿ ಬರಮಣ್ಣ ನಾಯಕ ಆಡಿಟೋರಿಯಂನಲ್ಲಿ ಬುಧವಾರ ಸಂಜೆ ನಡೆದ 17ನೇ ಘಟಿಕೋತ್ಸವ ಉದ್ಯಮಾಹ್-2025 ಸಮಾರಂಭದಲ್ಲಿ 97 ಸ್ನಾತಕ ಹಾಗೂ 30 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ವೈದ್ಯರಾಗುವವರು ಮುಖ್ಯವಾಗಿ ಸೇವಾಮನೋಭಾವ ರೂಢಿಸಿಕೊಳ್ಳಬೇಕು. ಸಮರ್ಪಣಾಭಾವ ಇರಬೇಕು. ತಮ್ಮನ್ನು ನಂಬಿ ಬರುವ ರೋಗಿಗಳ ಅನಾರೋಗ್ಯವು ತಮ್ಮ ಒಳ್ಳೆಯ ಮಾತುಗಳಿಂದಲೇ ಅರ್ಧ ಗುಣಮುಖರಾಗಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ನಮಗೆ ಹಣ ಮುಖ್ಯ ಆಗಬಾರದು. ಸೇವೆ ಮುಖ್ಯ ಆಗಬೇಕು. ಮದರ್ ತೆರೇಸಾರಂಥ ಸೇವಾ ಗುಣ ನಿಮ್ಮಲ್ಲಿರಬೇಕು. ನಿಮ್ಮ ಒಳ್ಳೆಯ ಗುಣಗಳನ್ನು ಇತರರು ಅನುಕರಿಸವಂತಿರಬೇಕು. ನಮ್ಮ ತಂದೆ ತಾಯಿಯರಿಗೆ ಗೌರವ ಕೀರ್ತಿ ತರುವಂತಹ ಕೆಲಸ ಮಾಡಬೇಕು. ಎಷ್ಟೋ ಪೋಷಕರು ತಮ್ಮ ಮಕ್ಕಳು ವೈದ್ಯರಾಗಬೇಕೆಂದು ದೊಡ್ಡ ಕನಸು ಕಂಡಿರುತ್ತಾರೆ. ಇಂದು ಆ ಕನಸು ನನಸಾಗಬಹುದು. ಆದರೆ ನಿಮ್ಮ ಉತ್ತಮ ಜನಸೇವೆಯಿಂದಾಗಿ ಸಮಾಜ ನಿಮ್ಮನ್ನು ಗೌರವಿಸುವಂತಾಗಬೇಕು ಅಂದಾಗ ಮಾತ್ರ ತಮ್ಮ ತಂದೆ ತಾಯಿಗಳಿಗೆ ನಿಜವಾದ ಕನಸು ಈಡೇರಿದಂತಾಗುತ್ತದೆ ಎಂದು ಹೇಳಿದರು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ನಮ್ಮ ವಿದ್ಯಾಲಯದ ಶ್ರೇಯವನ್ನು ಯಾಂಕ್ ವಿಜೇತರು ಇನ್ನಷ್ಟು ಉತ್ತುಂಗಕ್ಕೆ ಏರಿಸಿದ್ದಾರೆ. ಇವರ ಮುಂದಿನ ಸೇವೆಯು ಹಳ್ಳಿಗಾಡಿನ ಜನಸಾಮಾನ್ಯರಿಗೆ ತಲುಪುವಂತಾಗಲಿ, ಆಸ್ಪತ್ರೆಯ ಪ್ರತಿಯೊಂದು ಸಮಸ್ಯೆಗೂ ನಮ್ಮ ವಿದ್ಯಾಪೀಠ ಸಹಕರಿಸುತ್ತದೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಎಂ.ಎಸ್. ಮಾತನಾಡುತ್ತಾ, ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ರೋಗಿಗಳ ಸೇವೆಗೆ ಪೂರಕವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇಂದಿನ ಯಾಂಕ್ ವಿಜೇತರಲ್ಲಿ ಮಹಿಳೆಯರದೇ ಸಿಂಹಪಾಲು. ಮಹಿಳಾ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದು ಪೂರಕವಾಗಿದೆ ಎಂದರು.

ಡಾ| ರೇವತಿ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತ, ರ‍್ಯಾಂಕ್ ವಿಜೇತರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಹಿಳೆಯರ ಸ್ವಾಭಿಮಾನ ಹಕ್ಕುಗಳ ಬಗ್ಗೆ ಕೂಲಂಕುಶ ಮಾಹಿತಿ ನೀಡಿದರು.

ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ಸ್ನಾತಕೋತ್ತರ ವಿಭಾಗದ ಡಾ| ಮೋನಿಕಾ ಎಂ. 6ನೇ ರಾಂಕ್ ಓಬಿಜಿ ವಿಭಾಗ, ಡಾ| ಮೇಘನಾ ಎಸ್‌.ಎ. 8ನೇ ರಾಂಕ್ ರೆಸ್ಪಿರೇಟರಿ ವಿಭಾಗ, ಡಾ| ಮಧು ಜಿ.ಆರ್. 9ನೇ ರ‍್ಯಾಂಕ್ ಓಬಿಜಿ, ಡಾ|| ಐಶ್ವರ್ಯ ಪಿ ಜೋಗ್ 10ನೇ ರ‍್ಯಾಂಕ್ ಸೈಕಿಯಾಟ್ರಿ ವಿಭಾಗ, ಡಾ॥ ಅಪೂರ್ವ ಆರ್. ಶಹಪುರ. 9ನೇ ರ‍್ಯಾಂಕ್ ಡಿವಿಎಲ್ ಮತ್ತು ಸ್ನಾತಕ ವಿಭಾಗದ ಡಾ| ಹೆಗಡೆ ಅನುಷಾ ರಘುನಾಥ್, 3ನೇ ರ‍್ಯಾಂಕ್ ಎನ್‌ಟಿ, ಡಾ| ಸಮರ್ಥ ಕುಲಕರಣಿ 7ನೇ ರ‍್ಯಾಂಕ್ ಫಿಜಿಯೋಲಜಿ, ಡಾ॥ ಚೈತ್ರ ಎಸ್. 8ನೇ ರ‍್ಯಾಂಕ್ ಈಎನ್‌ಟಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಎಸ್. ನವೀನ್ ಮತ್ತು ವಿಜಯಪುರ ಬಿಎಲ್‌ಡಿಇ ಸಂಸ್ಥೆಯ ಕುಲಾಧಿಪತಿ ಡಾ. ವೆ.ಎಂ. ಜಯರಾಜ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ| ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ| ಎಂ.ಎನ್. ರಾಜೇಶ್, ಡಾ। ನಾಗೇಂದ್ರಗೌಡ, ಡಾ| ಗಿರೀಶ್ ಪಾಟೀಲ್, ಡಾ|| ರಾಮು ಆರ್. ಉಪಸ್ಥಿತರಿದ್ದರು.

ಡಾ|| ಕು. ಅಭಿಜ್ಞ ಪ್ರಾರ್ಥಿಸಿದರು. ಡಾ|| ಪ್ರಶಾಂತ್ ಜಿ. ಸ್ವಾಗತಿಸಿದರು. ಡಾ| ಅಮತ ಎ.ಎಂ. ಡಾ|| ಅಶ್ವಿನಿ ಜಿ.ಎನ್. ನಿರೂಪಿಸಿದರು. ಡಾ| ರಾಜೇಶ್ ಎಂ.ಎನ್. ವಂದಿಸಿದರು










 
 
 

21 Comments


Guest
a day ago

really thoughtful post, i enjoyed reading this. i often save useful clips with instagram video download tools for later reference.


Like

administrator
Mar 10

Thank you for this clear and informative article. The subject is explained in a straightforward way, making it easy to understand. Content like this is helpful when learning about how digital media platforms are evolving.

  1. slot online

  2. situs toto

  3. situs toto

Like

administrator
Mar 05

Thank you for this clear and informative article. The subject is explained in a straightforward way, making it easy to understand. slot pragmatic play Content like this is helpful when learning about how digital media platforms are evolving https://ic-connect.net/company/

Like

Guest
Nov 03, 2025

تُعَدّ مقابر البساتين واحدة من أعرق وأكبر مناطق الدفن في القاهرة، حيث تمتاز بموقعها الاستراتيجي الذي يجمع بين القرب من العاصمة وسهولة الوصول إليها من مختلف المناطق. تتميز هذه المقابر بتنوع مساحاتها وتصميماتها الهندسية التي تتيح للعائلات اختيار ما يناسب احتياجاتها، سواء من حيث المساحة أو مستوى الخصوصية. كما أن خدمات الصيانة والتنظيف المستمرة جعلت من مقابر البساتين مكانًا يحافظ على هيبته ونظافته في كل الأوقات. ومن الجوانب المميزة أيضًا توفر نظم تنظيمية دقيقة تضمن توثيق الملكية ونقلها بشكل قانوني واضح، ما يمنح المشتري الطمأنينة الكاملة عند التعاقد. وفي المقابل، أصبحت مقابر البستان طلعت مصطفى وجهة مفضلة للباحثين عن الراحة والفخامة، بفضل تصميمها العصري وموقعها الراقي بالقرب من التجمع الخامس، إلى جانب الخدمات الحديثة التي توفرها من طرق ممهدة ومساحات خضراء ومناطق مخصصة للزوار.…


Like

bottom of page